ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Sunday 12 July 2015

June 12 · 

ಶ್ರೀ ಶ್ರೀನಾಥ್ ರಾಯಸಮ್  ಎಂಬ ಈ ಮಿತ್ರರು FB ಮಿತ್ರರು. ಮುಖವನ್ನು ನೋದಿಲ್ಲ. ವೈಯಕ್ತಿಕ ಪರಿಚಯ ಆಗಿಲ್ಲ. ಆದರೂ FB ಯ ನನ್ನ ಚಟುವಟಿಕೆ ಗಳನ್ನು ಗಮನಿಸಿ ನನ್ನ ಬಗ್ಗೆಯೇ ವಿಷ್ಯ ಸಂಗ್ರಹಿಸಿ ಬರೆದಿದ್ದಾರೆ. ಇಂತವರೂ ಇರ್ತಾರೆ ನೋಡಿ!


ಫೇಸ್ ಬುಕ್ಕಿನಲ್ಲಿ ನಮ್ಮ ನಡುವೆ ಇರುವ ಮಹತ್ವದ ವ್ಯಕ್ತಿ ಕವಿ, ಸಾಹಿತಿ, ವೇದಮಯಿ - ಹರಿಹರಪುರ ಶ್ರೀಧರ್
( ಇದು ನಾನು ಬರೆದ ಲೇಖನವಲ್ಲ.. ಅವರ ಮೇಲಿನ ಅಭಿಮಾನದಿಂದ ಬೇರೆ ಮೂಲದಿಂದ ಸಂಗ್ರಹಿಸಿ ಇಲ್ಲಿ ಹಾಕಿದ್ದೇನೆ . ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರೂ ಜ್ಞಾನವೃದ್ಧರು ಅಂದರೆ ತಪ್ಪಾಗದು )
ಕವಿ, ಸಾಹಿತಿ, ವೇದಮಯಿ - ಹರಿಹರಪುರ ಶ್ರೀಧರ್
ಸಮಾಜದ ಸರ್ವಹಿತ ಬಯಸುವುದೆ ಸಾಹಿತ್ಯದ ಉದ್ದೇಶ. ಸಾಹಿತ್ಯ ಇರುವುದೆ ಸಾಮಾಜದ ಹಿತಕ್ಕೋಸ್ಕರ, ಆನಂದಕ್ಕೋಸ್ಕರವಾಗಿ. ಯಾವ ಸಾಹಿತ್ಯ ಸತ್‍ಚಿಂತನೆಗೆ ಎಡೆಮಾಡಿಕೊಡತ್ತದೋ ಅದು ಸಾರ್ವಕಾಲಿಕವಾಗಿ ನೆಲೆನಿಲ್ಲುತ್ತದೆ.
ಮೂಲವೇದ, ಉಪನಿಷತ್ತುಗಳು, ವಚನಗಳು, ಬೋಗ-ಸುಳಾದಿಗಳು, ಕೀರ್ತನೆಗಳು ಈ ದೆಸೆಯಲ್ಲಿ ಗುರುತಿಸಬಹುದಾದ ಸಾಹಿತ್ಯ ಸಂಗತಿಗಳು.
ವೇದವೆಂದರೆ ಮೂಗು ಮುರಿಯುವವರೇ ಅಧಿಕ! ಆದರೆ ಕಾಲಾನುಕ್ರಮೇಣ ವೇದಗಳಲ್ಲಿ ಬದಲಾವಣೆಯಾಗಿರುವುದು ಸುಳ್ಳಲ್ಲ! ಆದ್ದರಿಂದಲೇ ಹರಿಹರಪುರ ಶ್ರೀಧರ್ ಮೂಲವೇದದ ತಿರುಳನ್ನು ಪಸರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಿಸಿದ್ದಾರೆ. ವೇದಗಳು ಯಾವುದೆ ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತವಲ್ಲ. ಅವು ಸಾರ್ವತ್ರಿಕ ಎನ್ನುವುದನ್ನು ಮನಗಂಡ ಶ್ರೀಧರ್ ಎಲ್ಲರಿಗಾಗಿ ವೇದ ಎಂಬ ಪರಿಕಲ್ಪನೆಯಲ್ಲಿ ಜಾತ್ಯಾತೀತವಾಗಿ ಅರುಹುತ್ತ ಬಂದಿದ್ದಾರೆ.
ಜನನ ಃ ಶ್ರೀಯುತ ಹರಿಹರಪುರ ಶ್ರೀಧರ್ ಕ್ರಿ.ಶ.1954 ಡಿಸೆಂಬರ್ 10 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರಿಹರಪುರದ ಶ್ರೀ ನಾಗರಾಜಯ್ಯ ಹಾಗೂ ಶ್ರೀಮತಿ ನರಸಮ್ಮ ಬ್ರಾಹ್ಮಣ ದಂಪತಿಗಳ ಉದರದಲ್ಲಿ ಜನಿಸಿದರು.
ಶಿಕ್ಷಣ ಃ ಹರಿಹರಪುರದಲ್ಲಿಯೇ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಊರಿಗೆ ಸಮೀಪವಿರುವ ಚಾಕೇನಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಸಶಿಕ್ಷಣವನ್ನು ಪೂರೈಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪುನಃ ಹಾಸನದಲ್ಲಿ ಒಂದು ವರ್ಷ ಐಟಿಐ ಮಾಡಿ ನಂತರ ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆ ಸಂಸ್ಥೆಯಲ್ಲಿ ನ್ಯಾಷನಲ್ ಅಪ್ರೆಂಟೀಸ್ ತರಬೇತಿ ಪಡೆದರು.
ವೃತ್ತಿ ಃ ಕ್ರಿ.ಶ.1977 ರಲ್ಲಿ ಕೋಲಾರದ ಕೆಜಿಎಫ್ ನಲ್ಲಿರುವ ಭಾರತೀಯ ಗೋಲ್ಡ ಮೇನ್ಸ್ ಲಿಮಿಟೆಡ್‍ನಲ್ಲಿ ಎಲೆಕ್ಟೀಷಿಯನ್ ಆಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕ್ರಿ.ಶ.1979 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ವಿದ್ಯುತ್ ಪ್ರಸರಣ ನಿಗಮದಲ್ಲಿ ಮೇಲ್ವೀಚಾರಕರಾಗಿ ಕೆಲಸಕ್ಕೆ ಸೇರಿಕೊಂಡರು. ಹೊಳೆನರಸೀಪುರ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿ ಕ್ರಿ.ಶ 2000 ಸಾಲಿನಲ್ಲಿ ಹಾಸನದ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಇಂಜೀನಿಯರ್ ಆಗಿ ಬಡ್ತಿಹೊಂದಿದರು. ಹನ್ನೊಂದು ವರ್ಷಗಳ ಕಾಲ ಇಲ್ಲಿ ಸೇವೆಮಾಡಿ 2011 ರಲ್ಲಿ ಸಾಮಾಜಿಕ ಕಾರ್ಯದೊತ್ತಡ, ವೇದ ಪ್ರಸಾರ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದರ ಸಲುವಾಗಿ ಸ್ವಯಂ ಸೇವಾ ನಿವೃತ್ತಿ ಹೊಂದಿದರು.
ಸಾಹಿತ್ಯ ಕ್ಷೇತ್ರ ಃ ‘ತಿರುಳು’ - ಹಾಸನದ ಮನೆ ಮನೆ ಕವಿಗೋಷ್ಠಿಯ ಹಿರಿಯ ಸದಸ್ಯರಲ್ಲೊಬ್ಬರಾದ ಶ್ರೀಧರ್ ಅವರು ವೃತ್ತಿಯಲ್ಲಿದ್ದಾಗಲೇ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡವರು. 2006 ಜುಲೈ 2 ರಂದು ಶ್ರೀ ಶಂಕರಮಠದಲ್ಲಿ ನಡೆದ 116 ನೆಯ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹತ್ತು ಭಾವಗೀತೆಗಳ ‘ತಿರುಳು’ ಎಂಬ 16 ಪುಟಗಳ ಪುಟ್ಟ ಕವನ ಸಂಕಲನ ಬಿಡುಗಡೆಯಾಯಿತು. ಇದು ಕನ್ನಡ ಸಾಹಿತ್ಯಕ್ಕೆ ಶ್ರೀಧರ್ ಅವರ ಚೊಚ್ಚಲ ಕಾಣಿಕೆ. ಈ ಕೃತಿ ಕುರಿತು ವಿಚಾರ ಸಾಹಿತಿ ಚಂದ್ರಕಾಂತ ಪಡೆಸೂರ ವಿಮರ್ಶೆ ಮಾಡಿದ್ದಾರೆ. ಹಾಸನದ ಖ್ಯಾತ ಯುವ ಗಾಯಕಿ ಕುಮಾರಿ ಇಂಚರ ನಾಗೇಶ್ ಹಾಗೂ ಶ್ರೀಮತಿ ಲಲಿತರಮೇಶ್ ಹಾಡಿದ್ದಾರೆ.
ಇದ್ದಿರಬೇಕು ನಿನ್ನಂತೆ ಸದ್ದಿಲ್ಲದಂತೆ
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ
ನಿನ್ನನಾರು ಬಹುಕಾಲ ಇರಬೇಡ ಎಂದವರು..(ಇದ್ದಿರಬೇಕು)
ಈ ಕವಿತೆಯಲ್ಲಿ ಕವಿ ಶ್ರೀಧರ್ ಗಿಡ, ಮರ, ಬಳ್ಳಿ ಹೂವುಗಳ ಮಹತ್ವವನ್ನು ಸಾರಿದ್ದಾರೆ. ಇದೆ ಕವಿತೆಯಲ್ಲಿ ಮುಂದುವರೆದು ನನ್ನನ್ನೇ ತೇಯುತ್ತಾ ಕರಗಿಹೋಗುವೆ ನೀನು, ಅಳಿಯುವಾಗಲೂ ಅಳದೆ ಕೊಡುವೆ ಶ್ರೀಗಂಧವನು, ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ ಸುಟ್ಟು ಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ ಎನ್ನುವುದರ ಮೂಲಕ ಪರಿಸರದ ಅದರಲ್ಲೂ ಮರ ಹಾಗೂ ಹೂವಿನ ಅಗತ್ಯದ, ಮಹತ್ವದದ ಬಗ್ಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದಾರೆ.
ಅಂದು
ನನ್ನಮ್ಮ ತುತ್ತಿನೊಡೆ
ಕೊಟ್ಟಿದ್ದ ಮುತ್ತು,
ಒಣ ರೊಟ್ಟಿ-ಚಟ್ನಿ, ಸವಿಮಾತು,
ಆಹ! ಅದೆಂತ ರುಚಿ! ಎಷ್ಟು ಹಿತ !!!(ಅಮ್ಮನಾ ಕೈ ತುತ್ತು)
ಅಮ್ಮನಾ ಕೈತುತ್ತು ಕವಿತೆಯಲ್ಲಿ ಕವಿ ತನ್ನ ತಾಯಿ ನೀಡುವ ಕೈ ತುತ್ತಿನಲ್ಲಿರುವ ಮಾತೃವಾತ್ಸಲ್ಯವನ್ನು, ರುಚಿಯನ್ನು, ಆ ವಿಶೇಷ ಸವಿಯನ್ನು ಅನುಭವಿಸಿ ಬರೆದಿದ್ದಾರೆ.
ಜೀವನವೇದ ಃ 2015 ರಲ್ಲಿ ಪ್ರಕಟವಾಗಿರುವ 272 ಪುಟಗಳ ಜೀವನವೇದ ಕೃತಿಯನ್ನು ಬೆಂಗಳೂರಿನ ಸಮೃದ್ಧ ಸಾಹಿತ್ಯ ಪ್ರಕಾಶನವು ಪ್ರಕಟಣೆ ಮಾಡಿದೆ. ಇದು ಸಮೃದ್ಧ ಸಾಹಿತ್ಯ ಪ್ರಕಾಶನದ ಮೂವತ್ತೇಳನೆಯ ಪ್ರಕಟಣೆಯಾಗಿದೆ. ಇವರ ಗುರುಗಳಾದ ಸುಧಾಕರ ಶರ್ಮರವರ ತತ್ತ್ವಾದರ್ಶಗಳಿಗೆ ಪ್ರಭಾವಿತರಾದ ಶ್ರೀಧರ್ ಅವರಂತೆ ಇಲ್ಲಿಯೂ ಮೂಲವೇದದ ಉದ್ದೇಶವನ್ನು ಪಸರಿಸಬೇಕು, ವೇದ ಯಾವುದೆ ಒಂದು ಗುಂಪಿನ ಆಸ್ತಿಯಲ್ಲ! ಒಂದು ಗುಂಪಿಗೆ ಮಾತ್ರ ಸೀಮಿತವಲ್ಲ ಇದರ ಮೂಲ ಉದ್ದೇಶದಂತೆ ಇದು ಜನಸಾಮಾನ್ಯರಿಗೆ ತಲುಪಬೇಕೆಂಬ ಮಹದಾಶಯವಿಟ್ಟುಕೊಂಡು ಶ್ರೀಧರ್ ಅವರು ಹಾಸನದಲ್ಲಿ ವೇದ ಭಾರತಿಯನ್ನು ಸ್ಥಾಪಿಸಿದರು. ಆ ಮೂಲಕ ಪ್ರತಿದಿನ ಸಂಜೆ 6 ರಂದ 7 ರವರೆಗೆ ಅವರ ವೇದಪಾಠಶಾಲೆಯಲ್ಲಿ ಪಾಠ ಪ್ರವಚನಗಳನ್ನು, ಅಗ್ನಿಹೋತ್ರಗಳನ್ನು, ಮೂಲ ಮಂತ್ರಗಳನ್ನು ಪಠಿಸುತ್ತಾ ಕಾಯಕನಿರತರಾಗಿದ್ದಾರೆ.
ರಾಜ್ಯ ಮಟ್ಟದ ವಾರಪತ್ರಿಕೆಯಾದ ವಿಕ್ರಮ, ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಹಿತ, ಜನಮಿತ್ರ, ಹಾಸನವಾಣಿ ಮುಂತಾದ ಪತ್ರಿಕೆಗಳಲ್ಲಿ ಎಲ್ಲರಿಗಾಗಿ ವೇದ, ವೇದ ಪಥ, ಸರ್ವಹಿತ ವೇದ ಮುಂತಾದ ಶೀರ್ಷಿಕೆಯಲ್ಲಿ ಮೂಲವೇದದ ತಿರುಳನ್ನು, ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬರೆದಿದ್ದಾರೆ. ಈ ಎಲ್ಲಾ ಬರಹಗಳ ಒಟ್ಟು ಸಂಗ್ರಹವೆ ಈ ‘ಜೀವನವೇದ’ ಕೃತಿಯಾಗಿದೆ.
ಈ ಕೃತಿಯ ಬಗ್ಗೆ ಕೆಲವರ ಅಭಿಪ್ರಾಯಗಳು
‘..ವೈದಿಕ ಚಿಂತನೆಯ ಮಡುವಿನಲ್ಲಿ ಧುಮುಕಿ, ಯಥಾಶಕ್ತಿ ವಿಹರಿಸುತ್ತಾ, ಅದರ ಸವಿ-ತಂಪುಗಳನ್ನನುಭವಿಸುತ್ತಾ, ಅವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ಶ್ರೀ ಹರಿಹರಪುರ ಶ್ರೀಧರ್‍ರವರ ಮಾನವೀಯ ಕಳಕಳಿಗೆ ಇದು ಸಾಕ್ಷಿ.
ಹೀಗೆ ಹರಿಹರಪುರ ಶ್ರೀಧರ್ ಕಾವ್ಯ, ವೇದ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಕಾಷ್ಟು ಉಪಯುಕ್ತ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈಗಲೂ ಕಾರ್ಯಪ್ರವೃತ್ತರಾಗಿರುವುದು ಇವರ ಕಾಯಕನಿಷ್ಠೆಯ ಮಹತ್ವವನ್ನು ತೋರಿಸುತ್ತದೆ.



  • Geetha CG Nice to know about sri Sreedhar from ur article
    Thanks for sharing
    Like · Reply · 1 · June 12 at 8:25pm
  • Dattamurthy Rangopanth ಮುಕ್ತ ಮನಸ್ಸಿನಿಂದ ಅವರ ವಿಷಯಗಳನ್ನು ಹಂಚಿಕೊಂಡಿದ್ದೀರಿ ನಾಲ್ಕು ಜನರಿಗೆ ಪರಿಚಿತರನ್ನಾಗಿ ಮಾಡಿದ್ದೀರಿ.
    Like · Reply · 1 · June 12 at 8:41pm
  • Ananthakrishna Bhat Thank you sir, well introduced the good person
    Like · Reply · 1 · June 12 at 8:54pm
  • Raghu Ramanakoppa Sir.. looking smart..
    Like · Reply · 1 · June 12 at 9:06pm
  • Nagesh Nayak ನಾನು ಹಾಸನ ಜಿಲ್ಲೆಯಲಿ ಕೆಲವು ಕಾಲ ಸೇವೆ ಸಲಿಸಿದು,ಈ ಜಿಲ್ಲೆಯ ಇತಿಹಾಸ ,ಗುಡಿ ಗೋಪುರಗಳ ದರುಶನ ಮಾಡಿದವನು.ಮುಕುಂದೂರ ಶಿ್ೀಗಳ ಬಗ್ಗೆ ಓದಿದ ನಂತರ ಈಹಾಸನದ ಮಣ್ಣಿನಲ್ಲಿ ಏನೋ ವಿಷಿಷಠ ಗುಣ ವಿರುವದುಖಾತಿ್ಯಾಯಿತು.ಹಾಸನ ಜನತೆ ಈ ವಿಷಿಷಠ ಗುಣಗಳನ್ನು ಸದ್ಬಳಕೆಮಾಡಿಕೊಳಳಲೆಂದು ವಿನಂತಿಸಿಕೊಳ್ಳುತೆನೆ
    Like · Reply · 1 · June 12 at 9:30pm
  • Raveesh Karnur ನಿನ್ನೆ ಒಬ್ಬಾತ ಗೆಳೆಯ,ಪರಿಸರ ಮಾಲಿನ್ಯಕ್ಕೆ ಅಗ್ನಿಹೋತ್ರದಿಂದ ಪರಿಹಾರ ಅಂತ,ಪರಿಸರ ಮಾಲಿನ್ಯ ಮಂಡಳಿ ಹೇಳಿದ್ದಕ್ಕೆ 'ರತಿಅಗ್ವಿಹೋತ್ರಿ ಗೊತ್ತು ಇದೇನಿದು ಅಗ್ನಿಹೋತ್ರ' ಅಂತ ಕಮೆಂಚ್ ಮಾಡಿದ್ದ.ನನಗೇನೂ ಅದು ಅಜ್ಞಾನದ ಮಾತು ಅವಿಸದೆ ಕುಚೇಷ್ಠೆ ಅನಿಸಿತು.ಶ್ರೀಧರಣ್ಣ ಯಾವುದೇ ಬೇಧ ಇಲ್ಲದೆ ವೇದ ಪ್ರಸಾರ ಮಾಡುತ್ತಿರುವುದನ್ನು,ಮುಕ್ತವಾಗಿ ಪ್ರಶಂಸಿಸಲೇಬೇಕು.
    Like · Reply · 1 · June 13 at 7:47am
  • Shankaranarayana Upadyaya ಹರಿಹರಪುರ ಶ್ರೀದರ್ ಅವರನ್ನು ಪರಿಚಯಮಾಡಿದ್ದಕ್ಕೆ ದನ್ಯವಾದಗಳು

Yoga Veda sangama

Wednesday 8 July 2015

ವೇದಸುಧೆ: ವೇದಭಾರತೀ ಸತ್ಸಂಗದಲ್ಲಿ ನಡೆಯುತ್ತಿರುವ ವೇದಪಾಠದ ಒಂದು ಕ್ಲ...







ಹಾಸನದ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗವು ಹಲವರನ್ನು ಹತ್ತಿರ ತಂದಿದೆ. ಅಂತವರಲ್ಲಿ ನಿನ್ನೆ ಬಂದು ತಮ್ಮ ಮೆಚ್ಚುಗೆ ವ್ಯಕ್ತಪಟಿಸಿದ ನಿವೃತ್ತ  ಅಧೀಕ್ಷಕ ಇಂಜಿನಿಯರ್ [KUWSS] ಶ್ರೀ ರಂಗಸ್ವಾಮಿಯವರು. ಅವರು ಬೆಳಗಾಮ್ ನಿಂದ ತಮ್ಮ ತಂಗಿಮನೆಗೆ ಬಂದಿದ್ದರು. ನಮ್ಮ ಚಟುವಟಿಗೆ ಅವರಿಗೆ ಎಷ್ಟು ಇಷ್ಟವಾಯಿತೆಂದರೆ ನಮ್ಮನ್ನು ಬೆಳಗಾಮ್ ಗೆ ಆಹ್ವಾನಿಸಿದ್ದಾರೆ. ಅಲ್ಲೊಂದು ಅಗ್ನಿಹೋತ್ರ ಶಿಬಿರ ನಡೆಯಲಿದೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮಿತ್ರರಾದ ಕೆ.ಆರ್.ನಗರದ ಡಾ|| ಶಿವಲಿಂಗಪ್ಪನವರಿಗೆ ಕರೆಮಾಡಿ ಅವರನ್ನು ಪರಿಚಯ ಮಾಡಿಸಿ ಕೆ.ಆರ್.ನಗರದಲ್ಲಿ ಅವರು ನಡೆಸುವ ಯೋಗ ತರಬೇತಿ ಶಿರದಲ್ಲಿ ಅಗ್ನಿಹೋತ್ರ ನಡೆಸಿಕೊಡಲು ಆಹ್ವಾನಿಸಿದ್ದಾರೆ. ಇಂದು ಅವರ ತಂಗಿಯಮನೆಯಲ್ಲೇ ಅಗ್ನಿಹೋತ್ರ ಏರ್ಪಡಿಸಿ ಸ್ವತಃ ಮಾಡಿ ಸಂತೋಷಪಟ್ಟರು.

ಹೌದು, ನಮ್ಮ ಸತ್ಸಂಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಲಾದಷ್ಟು ಸ್ಥಳಗಳಿಗೆ ಈ ವಿಚಾರವನ್ನು ತಲುಪಿಸಿಸುವ ಕೆಲಸವನ್ನು ಮಾಡಲು ನಾವೂ ಕಟಿಬದ್ಧರಾಗಿದ್ದೇವೆ.

Wednesday 5 November 2014

ಹಾಸನದಲ್ಲಿ ಸಾಮೂಹಿಕ ಅಗ್ನಿಹೋತ್ರ



ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.

ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.

ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.

ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.

ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.

ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.

ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.

ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.

ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.

ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.

ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.

ಓಂ ಅಮೃತೋಪಸ್ತರಣಮಸಿ ಸ್ವಾಹಾ

ಓಂ ಅಮ್ರುತಾಮಪಿಧಾನಮಸಿ ಸ್ವಾಹಾ

ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ

ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.

ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ

ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]

ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]

ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]

ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]

ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]

ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು

[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]

ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.

ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.

ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.

ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.

ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.



Wednesday 17 September 2014

ಸಾಮೂಹಿಕ ಅಗ್ನಿಹೋತ್ರ





ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ


: ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು. ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ http://www.divshare.com/download/26086812-18b" height="426" src="https://scontent-b-dfw.xx.fbcdn.net/hphotos-xpf1/v/t1.0-9/10687078_337665919734841_705836925885351718_n.jpg?oh=b3f6ced5f85ccd2c9af0929334570b14&oe=548F1871" style="margin-left: auto; margin-right: auto;" width="640" />
ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕಾರ್ಯಕ್ರಮ





ಹಾಸನದ ವೇದಭಾರತಿಯ ಸದಸ್ಯರು ಪಠಿಸುವ ಈಶ್ವರಸ್ತುತಿ ಮತ್ತು ಅಗ್ನಿಹೋತ್ರ ಮಂತ್ರವನ್ನು ಇಲ್ಲಿ ಕೇಳಬಹುದು. ಹೊಸಬರು ಕಲಿಯಲು ಅನುವಾಗುವಂತೆ ಇನ್ನೆರಡು-ಮೂರು ದಿನಗಳಲ್ಲಿ  ಆಡಿಯೋಕ್ಲಿಪ್ ಅಳವಡಿಸಲಾಗುವುದು.